August 30, 2009

ತೀರ್ಥಹಳ್ಳಿಯ ಎಳ್ಳಮಾವಸ್ಯೆ ಜಾತ್ರೆ

ಮಲೆನಾಡಿನ ಕೇಂದ್ರ ಬಿಂದು ತೀರ್ಥಹಳ್ಳಿ. ತುಂಗಾನದಿಯ ದಡದಲ್ಲಿರುವ ಈ ಪವಿತ್ರ ಯಾತ್ರ ಸ್ಥಳ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಧಾಮರ್ಿಕ ಹೀಗೆ ಎಲ್ಲಾ ಕೇತ್ರಗಳಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅವುಗಳಲ್ಲಿ ತೀರ್ಥಹಳ್ಳಿಯ ಎಳ್ಳಮಾವಸ್ಯೆ ಜಾತ್ರೆಯು ಒಂದು. ಹಿಂದೂ ಪುರಾಣದ ಪ್ರಕಾರ, ಪರಶುರಾಮಮುನಿ ತನ್ನ ತಂದೆ ಜಮದಗ್ನಿಯ ಅದೇಶದಂತೆ, ತಾಯಿ ರೇಣುಕಳ ತಲೆಯನ್ನು ಕೊಡಲಿಯಿಂದ ಕತ್ತರಿಸಿದಾಗ, ಕೊಡಲಿಗೆ ಅಂಟಿದ ರಕ್ತದ ಕಲೆ ಹಲವು ನದಿ ಹಾಗು ಸಮುದ್ರದಲ್ಲಿ ತೊಳೆದರೂ ಹೊಗುವುದಿಲ್ಲ. ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಕೊಡಲಿಯನ್ನು ತೊಳೆದಾಗ ಎಳ್ಳಿನ ಗಾತ್ರದ ರಕ್ತದ ಕಲೆ ಹೊಗುತ್ತದೆ. ಅದು ಮಾಗ್ರಶಿರ ಋತುವಿನ ಅಮಾವಾಸ್ಯೆಯ ದಿನವಾಗಿತ್ತು. ಆ ದಿನವೇ ಎಳ್ಳಮಾವಸ್ಯೆಯಾಯಿತು. ಆ ಸ್ಥಳಕ್ಕೆ ಪರಾಶುರಾಮ ತೀರ್ಥ ಅಥವಾ ರಾಮ ತೀರ್ಥ ಎಂದು ಹೆಸರು. ತುಂಗಾನದಿಯ ದಡದಲ್ಲಿರುವ ರಾಮೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಸ್ವತಃ ಪರುಶುರಾಮಮುನಿಯೇ ಸ್ಥಾಪಿಸಿದ್ದರು ಎಂದು ಪುರಾಣಗಳು ಹೇಳುತ್ತವೆ. ಇದರ ಪ್ರತೀಕವಾಗಿ ಪ್ರತಿ ವರ್ಷವೂ ತೀರ್ಥಹಳ್ಳಿಯಲ್ಲಿ ಮೂರು ದಿನಗಳ ಎಳ್ಳಮಾವಸ್ಯೆ ಜಾತ್ರೆ ನೆಡೆಯುತ್ತದೆ. ಸುತ್ತಮುತ್ತದ ಹಳ್ಳಿಗಳಿಂದಲ್ಲದೆ, ದೂರ ದೂರದ ಊರಿನಿಂದ ಸಾವಿರಾರು ಜನರು ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಅಗಮಿಸುತ್ತಾರೆ. ಎಳ್ಳಮಾವಸ್ಯೆಯ ದಿನ ಉತ್ಸವಮೂರ್ತಿಯಾದ ರಾಮೇಶ್ವರ ದೇವರಿಗೆ ತುಂಗಾನದಿಯ ರಾಮಮಂಟಪದಲ್ಲಿ ಅಭಿಷೇಕ ಮಾಡಲಾಗುತ್ತದೆ.ನಂತರ ಭಕ್ತಾಧಿಗಳು ಅಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇದು ಜಾತ್ರೆಯ ಮೊದಲ ದಿನ. ರಥೋತ್ಸವ ಎರಡನೇ ದಿನದ ಅಕರ್ಷಣೆ. ರಥಬೀದಿಯಲ್ಲಿ ನೂರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ತೀರ್ಥಹಳ್ಳಿ ಎಳ್ಳಮಾವಸ್ಯೆ ಜಾತ್ರೆಯ ಪ್ರಮುಖ ಅರ್ಕಷಣೆಯಾದ ತೆಪ್ಪೋತ್ಸವ ಮೂರನೇ ದಿನ ನೆಡೆಯುವುದು. ಅಂದು ಸಂಜೆ ಉತ್ಸವ ಮೂರ್ತಿಯನ್ನು ನದಿಯ ಒಂದು ತೀರದಿಂದ (ದೇವಸ್ಥಾನ) ಇನ್ನೊಂದು ತೀರದ ವರೆಗೆ( ಕುರುವಳ್ಳಿ) ತೆಪ್ಪದಲ್ಲಿ ತೆಗೆದುಕೊಂಡು ಹೋಗಿ ವಾಪಸ್ಸು ಕರೆತರಲಾಗುವುದು. ಇದೇ ಎಳ್ಳಮಾವಸ್ಯೆಜಾತ್ರೆಯ ಪ್ರಸಿದ್ಧ ತೆಪ್ಪೋತ್ಸವ. ಬಣ್ಣ ಬಣ್ಣದ ಪಟಾಕಿಗಳು ಇದರ ಒಂದು ಭಾಗವಾಗಿದೆ. ಬಾನಂಗಳದಲ್ಲಿ ಪಟಾಕಿಗಳ ಚಿತ್ತಾರದಿಂದ ನೊಡುಗರ ಮನಸುರೆಗೊಳ್ಳುತ್ತದೆ. ಮರಳು ದಂಡೆ ಮೇಲೆ ಕುಳಿತು ಪಟಾಕಿಗಳ ಬಣ್ಣದ ಬೆಳಕಿನ ನದಿಯಲ್ಲಿ ತೇಲುವ ಅಲಂಕೃತ ತೆಪ್ಪವನ್ನು ನೋಡುವುದೇ ಒಂದು ಅದ್ಭುತ ಅನುಭವ. ಕೊರೆಯುವ ಚಳಿಯನ್ನು ಮರೆತು ಸಾವಿರಾರು ಜನರು ಈ ಉತ್ಸವದ ಅನಂದವನ್ನು ಸವಿಯುತ್ತಾರೆ. ಹಲವಾರೂ ವರ್ಷಗಳಿಂದ ನೆಡೆಯುತ್ತಿರುವ ಈ ಉತ್ಸವಕ್ಕೆ ನೋಡುಗರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಜನ ಮರುಳೋ ಜಾತ್ರೆ ಮರುಳೋ ಎಂಬುದು ಇಲ್ಲಿ ನೂರಕ್ಕೆ ನೂರು ಸತ್ಯ . ಸಾಮಾನ್ಯವಾಗಿ ಈ ಜಾತ್ರೆ ಡಿಸೆಂಬರ್ ಕೊನೆ ವಾರ ಅಥವಾ ಜನವರಿ ಮೊದಲ ವಾರದಲ್ಲಿ ನೆಡೆಯುತ್ತದೆ. ರಥಬೀದಿಯ ಎರಡು ಬದಿಯಲ್ಲಿ ವಿವಿಧ ಊರಿನಿಂದ ಬಂದ ತರಾವರಿ ಅಂಗಡಿಗಳು ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರನ್ನು ತನ್ನ ಬಳಿ ಸೆಳೆಯಲು ಪೈಪೊಟಿ ನೆಡೆಸುತ್ತವೆ.. ಮುಗಿಲು ಮುಟ್ಟುವ ತೊಟ್ಟಿಲುಗಳು, ನಾನ ರೀತಿಯ ಅಟಿಕೆಗಳು, ಬಣ್ಣದ ಬೆಲೂನ್ಗಳು ಚಳಿಯನ್ನು ಮರೆಸಿ, ಜಾತ್ರೆಯ ರಂಗನ್ನು ಹೆಚ್ಚಿಸುತ್ತವೆ.......

No comments: